ಪತ್ರಿಕಾ
ಪ್ರಕಟಣೆ ದಿನಾಂಕ: 14-02-2018
ಜೂಜಾಡುತ್ತಿದ್ದ
5
ಜನರ ಬಂಧನ, ಬಂಧಿತರಿಂದ
ಸುಮಾರು 5
ಸಾವಿರ ನಗದು ವಶ:
ದಿನಾಂಕ: 13-02-2018 ರಂದು
ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು
ಹೋಬಳಿ,
ಆಲಗೌಡನಹಳ್ಳಿ
ಗ್ರಾಮದ ರೈಲ್ವೆ ಹಳಿ ಪಕ್ಕದಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ವಸಂತ, ಸಿಪಿಐ, ಹೊಳೆನರಸೀಪುರ
ವೃತ್ತ,
ರವರಿಗೆ ಬಂದ
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು
ಹೆಸರು ವಿಳಾಸ ಕೇಳಲಾಗಿ 1) ನಾರಾಯಣ ಬಿನ್ ಮಲ್ಲೇಗೌಡ, 48 ವರ್ಷ, ಆಲಗೌಡನಹಳ್ಳಿ
ಗ್ರಾಮ,
ಹೊಳೆನರಸೀಪುರ
ತಾಲ್ಲೂಕು 2) ಕಾಂತರಾಜು ಬಿನ್ ಚನ್ನಯ್ಯ, 30 ವರ್ಷ, ಆಲಗೌಡನಹಳ್ಳಿ
ಗ್ರಾಮ,
ಹೊಳೆನರಸೀಪುರ
ತಾಲ್ಲೂಕು 3) ನೀಲಶೆಟ್ಟಿ ಬಿನ್ ಮಲ್ಲಶೆಟ್ಟಿ, 50 ವರ್ಷ, 4) ಹೇಮಂತ್ ಬಿನ್ ಮಹಾದೇವ, 29 ವರ್ಷ, ದೊಡ್ಡಕಾಡನೂರು
ಗ್ರಾಮ,
ಹೊಳೆನರಸೀಪುರ
ತಾಲ್ಲೂಕು 5) ಮೋಹನ್ ಬಿನ್
ನಂಜೋಜಿರಾವ್, 45 ವರ್ಷ, ದೊಡ್ಡಕಾಡನೂರು ಗ್ರಾಮ, ಹೊಳೆನರಸೀಪುರ
ಟೌನ್ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 5 ಸಾವಿರ
ನಗದನ್ನು ಅಮಾನತ್ತುಪಡಿಸಿಕೊಂಡು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಹೆಂಗಸು
ಕಾಣೆ
ದಿನಾಂಕ:
13-02-2018 ರಂದು
ಮಧ್ಯಾಹ್ನ 12-15 ಗಂಟೆ
ಸಮಯದಲ್ಲಿ ಹಾಸನದ ಜಯನಗರ, 1 ನೇ ಮೈನ್, 2 ನೇ ಕ್ರಾಸ್, ಬೈರವೇಶ್ವರ
ನಿಲಯ ವಾಸಿ ನಾಗರಾಜ ರವರ ಪತ್ನಿ ಶ್ರೀಮತಿ ರಾಧಮಣಿ, ಈಗ್ಗೆ 9
ವರ್ಷದಿಂದ ಮಾನಸಿಕ ಅಸ್ವಸ್ಥಳಾಗಿದ್ದು, ಹಾಸನ ಮಹಿಳಾ ಠಾಣೆಗೆ ದೂರು ನೀಡಲು ಬಂದಿದ್ದು, ತಿಂಡಿ ಮಾಡಿಕೊಂಡು ಬರುವುದಾಗಿ ಮಹಿಳಾ ಠಾಣೆಯಿಂದ ಹೋದವಳು ವಾಪಸ್ ಠಾಣೆಗೆ ಬಾರದೆ ಮನೆಗೂ
ಹೋಗದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಶ್ರೀಮತಿ ರಾಧಮಣಿ, ರವರ ಪತಿ ಶ್ರೀ ನಾಗರಾಜ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ
ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ರಾಧಮಣಿ ಕೋಂ ನಾಗರಾಜ, 38 ವರ್ಷ, 5'3'' ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ, ಸಾಧಾರಣ
ಮೈಕಟ್ಟು, ಕನ್ನಡ
ಭಾಷೆ ಮಾತನಾಡುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268967ಕ್ಕೆ ಸಂಪರ್ಕಿಸುವುದು.
No comments:
Post a Comment