* * * * * * HASSAN DISTRICT POLICE

Monday, January 22, 2018

PRESS NOTE : 21-01-2018

ಪತ್ರಿಕಾ ಪ್ರಕಟಣೆ                          ದಿನಾಂಕ:21-01-2018

ಪ್ಯಾಸೆಂಜರ್ ಅಪೇ ಆಟೋ ಕೆಳಕ್ಕೆ ಬಿದು, ಒಂದು ಸಾವು : ದಿನಾಂಕ: 20-01-2018 ರಂದು ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕ್ ಶ್ರವಣೂರು ಗ್ರಾಮದ ಮಂಜುನಾಥ ರವರ ಮಗ ಕುಶಾಲ್ ರವರು ಕೆಎ-13-ಎ-6711 ಅಪೇ ಪ್ಯಾಸೆಂಟರ್ ಆಟೋದಲ್ಲಿ ಹೋಗುತ್ತಿದ್ದಾಗ ಪೆದ್ದನಹಳ್ಳಿ ಗೇಟ್ ಬಳಿ ಅಪೇ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿ ಕೆಳಕ್ಕೆ ಕೆಡವಿದ್ದು, ಆಟೋದಲ್ಲಿದ್ದ ಕುಶಾಲ ಮತ್ತು ಇತರೆ 5-6 ಜನರಿಗೆ ಏಟಾಗಿದ್ದು, ಚಿಕಿತ್ಸೆಗೆಂದು ಹಾಸನದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಚಿಕಿತ್ಸೆ ಫಲಕಾರಿಯಾಗದೆ ಕುಶಾಲ್ ಬಿನ್ ಮಂಜುನಾಥ, 18ವರ್ಷ, ಶ್ರವಣೂರು ಗ್ರಾಮ, ಹೊಳೆನರಸೀಪುರ ತಾಲ್ಲೂಕ್ ರವರು ಮೃತಪಟ್ಟಿರುತ್ತಾರೆಂದು ಮೃತರ ತಂದೆ ಮಂಜುನಾಥ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

ಬೈಕ್ಗೆ ಮಾರುತಿ ಒಮಿನಿ ಕಾರು ಡಿಕ್ಕಿ ಒಂದು ಸಾವು : ದಿನಾಂಕ: 20-01-2018 ರಂದು ಸಂಜೆ 7-40 ಗಂಟೆ ಸಮಯದಲ್ಲಿ ಅರಕಲಗೂಡು ಟೌನ್ ಕೋಟೆ ವಾಸಿ ಸುನಿತ ರವರ ಗಂಡ ರವಿ ರವರು ಸುರೇಶ ರವರೊಂದಿಗೆ ಫ್ಯಾಷನ್ ಪ್ರೋ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಅರಕಲಗೂಡು ಟೌನ್ ಜಿಎಂಎಸ್ ಗೌಡ ಪೆಟ್ರೋಲ್ ಬಂಕ್ ಮುಂಭಾಗ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಅರಕಲಗೂಡು ಕಡೆಯಿಂದ ಬಂದ ಕೆಎ-13-ಎನ್-8675 ರ ಮಾರುತಿ ಒಮಿನಿ ಕಾರು ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರಿಗೂ ಏಟಾಗಿದ್ದು, ಚಿಕಿತ್ಸೆಗೆಂದು ಹಾಸನದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯೆ ರವಿ ಬಿನ್ 42ವಷ್, ಕೋಟೆ, ಅರಕಲಗೂಡು ಟೌನ್ ರವರು ಮೃತಪಟ್ಟಿರುತ್ತಾರೆಂದು ಮೃತರ ಹೆಂಡತಿ ಸುನಿತ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

No comments: