* * * * * * HASSAN DISTRICT POLICE

Saturday, January 20, 2018

PRESS NOTE : 19-01-2018

ಪತ್ರಿಕಾ ಪ್ರಕಟಣೆ                                                                  ದಿನಾಂಕ: 19-01-2018.

ಬೈಕ್ಗಳ ಮುಖಾಮುಖಿ ಡಿಕ್ಕಿ ಬೈಕ್ ಸವಾರನ ಸಾವು :          ದಿನಾಂಕ: 19-01-2018 ರಂದು ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಶಿರದನಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ರವರು ತಮ್ಮ ಬಾಬ್ತು ಕೆಎ-51-ಇಟಿ-3112 ರ ಬೈಕಿನಲ್ಲಿ ಸ್ವಂತ ಕೆಲಸದ ನಿಮಿತ್ತ ಅರಕಲಗೂಡಿಗೆ ಬಂದು ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಅರಕಲಗೂಡು-ಮಲ್ಲಿಪಟ್ಟಣ ರಸ್ತೆಯ ಬಾಳಯ್ಯನಕೊಪ್ಪಲಿನಿಂದ ಸ್ವಲ್ಪ ಮುಂದೆ ರಸ್ತೆ ಎಡ ಬದಿಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕೆಎ-13-ಇಕೆ-3662 ರ ಬೈಕ್ ಚಾಲಕ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ  ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಪುಟ್ಟಸ್ವಾಮಿಗೌಡ, 60 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಲೀಲಾವತಿ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಬೈಕಿನಿಂದ ಬಿದ್ದು, ವ್ಯಕ್ತಿ ಸಾವು :       ದಿನಾಂಕ: 17-01-2018 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣ ಸುಬ್ರಹ್ಮಣ್ಯನಗರ, ಚಚರ್್ ಕಾಲೋನಿ ವಾಸಿ ಬಿ.ರಂಗನಾಥ ರವರ ಮಗ ಸುನಿಲ್ ರವರು ಗುತ್ತಿನಕೆರೆಗೆ ಜಾತ್ರೆ ಸಂಬಂಧ ಕೆಎ-51-ಈಎಸ್-5862 ರ ಹೊಂಡಾ ಯುಗಾ ಬೈಕಿನಲ್ಲಿ ಹೋಗಿದ್ದರು, ರಾತ್ರಿ ಸುಮಾರು 12-00 ಗಂಟೆ ಸಮಯದಲ್ಲಿ ರಂಗನಾಥ ರವರ ಅಕ್ಕನ ಮಗ ಮನೆಯ ಹತ್ತಿರ ಬಂದು ಸುನಿಲ್  ಅರಸೀಕೆರೆ-ಮೈಸೂರು ಹೆದ್ದಾರಿಯಲ್ಲಿರುವ ಹೊಸೂರು ಗೇಟ್ ಹತ್ತಿರ ಅಪಘಾತವಾದ ರೀತಿಯಲ್ಲಿ ಬಿದ್ದಿದ್ದು, ಅರಸೀಕೆರೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಸುನಿಲ್ ಬಿನ್ ಬಿ.ರಂಗನಾಥ, 28 ವರ್ಷ ರವರು  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆಂದು ಮೃತರ ತಂದೆ ಶ್ರೀ ರಂಗನಾಥ ಬಿ. ರವರು ಕೊಟ್ಟ ದೂರಿನ ಮೇರೆಗೆ  ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ  ಕೈಗೊಂಡಿರುತ್ತದೆ.


ಹುಡುಗಿ ಕಾಣೆ :       ದಿನಾಂಕ: 06-01-2018 ರಂದು  ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಹೆಬ್ಬಾಳು ಗ್ರಾಮದ ಜಗದೀಶ ಹೆಚ್.ಸಿ. ರವರ ಮಗಳು ಕಾವ್ಯ ಹೆಚ್.ಜೆ. ರವರು ಬೇಲೂರಿಗೆ ಸ್ನೇಹಿತೆಯ ಮನೆಗೆ ಹೋಗಿಬರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕಾವ್ಯ ಹೆಚ್.ಜೆ ರವರ ತಂದೆ ಶ್ರೀ ಜಗದೀಶ ಹೆಚ್.ಸಿ ರವರು ದಿನಾಂಕ: 18-01-2018 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕಾವ್ಯ ಹೆಚ್.ಜೆ. ಬಿನ್ ಜಗದೀಶ ಹೆಚ್.ಸಿ. 18 ವರ್ಷ, 5'4'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬೇಲೂರು ಠಾಣೆ ಫೋನ್ ನಂ. 08177-222444 ಕ್ಕೆ ಸಂಪರ್ಕಿಸುವುದು.

No comments: