ಪತ್ರಿಕಾ ಪ್ರಕಟಣೆ ದಿನಾಂಕ: 17-01-2018
ಕಾರು ಡಿಕ್ಕಿ, ಅಪರಿಚಿತ ವ್ಯಕ್ತಿ ಸಾವು
ದಿನಾಂಕ: 16-01-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಕುರುವಂಕ ಗ್ರಾಮದ ವಾಸಿ ಶ್ರೀ ಮಂಜುನಾಥ, ಮತ್ತು
ಶ್ರೀ ಬಸವರಾಜು, ರವರು ಎಲ್ & ಟಿ ಹೈವೆ ಪೆಟ್ರೋಲಿಂಗ್ ವಾಹನದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಚಿಕ್ಕಗೊಂಡನಹಳ್ಳಿ
ಬೈಪಾಸ್ ಎನ್ಹೆಚ್-75 ರಸ್ತೆ ಹತ್ತಿರ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿ ರಸ್ತೆ ಎಡಬದಿಯಲ್ಲಿ ನಡೆದುಕೊಂಡು
ಹೋಗುತ್ತಿದ್ದು, ಹಿಂದಿನಿಂದ ಬಂದ ಕೆಎ-18,
ಪಿ-8934ರ ಬೋಲೇರೋ ವಾಹನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು
ಅಪರಿಚಿತ ವ್ಯಕ್ತಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ
ಮೃತಪಟ್ಟಿರುತ್ತಾರೆಂದು ಶ್ರೀ ಮಂಜುನಾಥ,
ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಈ ವ್ಯಕ್ತಿಯ ಸುಳಿವು ಮತ್ತು
ಪತ್ತೆಗಾಗಿ 08176-256707, 252237,
273632 ಕ್ಕೆ ಸಂಪರ್ಕಿಸುವುದು.
ಮೃತಪಟ್ಟ ಅಪರಿಚಿತ ಗಂಡಸಿನ
ಚಹರೆ ವಿವರ ಈ ಕೆಳಕಂಡಂತಿರುತ್ತೆ.
1. ಹೆಸರು : ಗೊತ್ತಿಲ್ಲ.
2. ತಂದೆ/ಗಂಸನ ಹೆಸರು : ಗೊತ್ತಿಲ್ಲ.
3. ವಯಸ್ಸು : 35-40
ವರ್ಷ
4. ಎತ್ತರ : 5.2 ಅಡಿ
ಎತ್ತರ
5. ಚಹರೆ ಗುರುತು : ದುಂಡು ಮುಖ, ಧೃಢಕಾಯ ಶರೀರ, ಎಣ್ಣೆಗೆಂಪು
ಮೈ ಬಣ್ಣ
6. ಬಟ್ಟೆ : ನೀಲಿ ಬಣ್ಣದ ಟೀ ಶರ್ಟ, ಕಪ್ಪು ಬಣ್ಣದ ಬರ್ಮಡ ಚಡ್ಡಿ ಧರಿಸಿರುತ್ತಾರೆ.
7. ಕೂದಲು : ಕಪ್ಪು
ತಲೆ ಕೂದಲು
No comments:
Post a Comment