* * * * * * HASSAN DISTRICT POLICE

Tuesday, January 16, 2018

PRESS NOTE 16-01-2018

                        

                     ಪತ್ರಿಕಾ ಪ್ರಕಟಣೆ               ದಿನಾಂಕ: 16-01-2018

ಲಾರಿ ಬೈಕುಗಳಿಗೆ ಡಿಕ್ಕಿ ಒಬ್ಬರ ಸಾವು, ಇಬ್ಬರಿಗೆ ಗಾಯ


          ದಿನಾಂಕ: 15-01-2018 ರಂದು ಸಂಜೆ 06-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮರ್ಕುಲಿ ಅಂಚೆ, ನಾಗನಹಳ್ಳಿ ಗ್ರಾಮದ ಶಮಂತ್ ಕುಮಾರ್ ಹಾಗೂ ಚಿಕ್ಕೇಗೌಡ, ಸಂಪತ್ ಮತ್ತು ಪುನಿತ್ @ ಹೇಮಂತ್ಕುಮಾರ್ ರವರುಗಳು ಒಟ್ಟಿಗೆ ವೆಲ್ಡಿಂಗ್ ಕೆಲಸಕ್ಕೆ ಹೊಸೂರು ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು  ಶಮಂತ್ ಮತ್ತು ಪುನಿತ್ ಇಬ್ಬರೂ ಕೆಎ-13-ಇಕೆ-1586 ರ ಬೈಕಿನಲ್ಲಿ ಚಿಕ್ಕೇಗೌಡ ಮತ್ತು ಸಂಪತ್ ರವರು ಒಂದು ಬೈಕಿನಲ್ಲಿ ಹಾಸನ-ಬೇಲೂರು ರಸ್ತೆಯ ಮಣಿಚನಹಳ್ಳಿ ಹತ್ತಿರವಿರುವ ದೇವೇಗೌಡ ನರ್ಸಿಂಗ್ ಕಾಲೇಜ್ ಹತ್ತಿರ ಹಾಸನಕ್ಕೆ ಹೋಗುತ್ತಿದ್ದಾಗ ಬೇಲೂರು ಕಡೆಯಿಂದ ಬಂದ ಕೆಎ-39-8033 ರ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಚಿಕ್ಕೇಗೌಡ ರವರ ಬೈಕ್ ಓವರ್ಟೇಕ್ ಮಾಡಿಕೊಂಡು ಬಂದು ಶಮಂತ್ ಕುಮಾರ್ ರವರ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಶಮಂತ್ ಮತ್ತು ಪುನಿತ್ @ ಹೇಮಂತ್ ಕುಮಾರ್ ಇಬ್ಬರೂ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು, ಲಾರಿಯ ಚಕ್ರದ ಕೆಳಗೆ ಸಿಕ್ಕಿಕೊಂಡು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಶಮಂತ್ ಕುಮಾರ್ ಚಾಲನೆ ಮಾಡುತ್ತಿದ್ದ ಬೈಕ್ ಮುಂಭಾಗದಲ್ಲಿ ಹೋಗುತ್ತಿದ್ದ ಅರೇಕಲ್ ಹೊಸಳ್ಳಿ ಗ್ರಾಮದ ಸೋಮೇಗೌಡ ರವರ ಬೈಕಿಗೆ ಡಿಕ್ಕಿಯಾದ್ದರಿಂದ ಬೈಕ್ ಚಾಲನೆ ಮಾಡುತ್ತಿದ್ದ ಸೋಮೇಗೌಡ  ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಅವರಿಗೂ ಸಹ ಪೆಟ್ಟಾಗಿ ರಕ್ತಗಾಯಗಳಾಗಿದ್ದು, ಎಲ್ಲರನ್ನು  ಚಿಕಿತ್ಸೆಗಾಗಿ  ಹಾಸನ ಮಂಗಳಾ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಮಂತ್ ಕುಮಾರ್ ಬಿನ್ ಚುಂಚೇಗೌಡ, 21 ವರ್ಷ ರವರು ಮೃತಪಟ್ಟಿರುತ್ತಾರೆಂದು ಉಳಿದವರು ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಚಿಕ್ಕೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: