ಪತ್ರಿಕಾ ಪ್ರಕಟಣೆ
ದಿನಾಂಕ: 06-01-2018
ಯಾವುದೋ ವಾಹನ ಡಿಕ್ಕಿ ಪಾದಚಾರಿ ಸಾವು:
ದಿನಾಂಕ: 05-01-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಅರಸೀಕೆರೆಪಟ್ಟಣದ 8ನೇ ಕ್ರಾಸ್ ವಾಸಿ ಶ್ರೀ ಸಲ್ಮಾನ್ಪಾಷ್, ರವರ ಬಾಬ್ತು ಕೆಎ-13, ಆರ್ 8617 ರ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಕಲ್ಪಚಾರ್ ಪ್ರವೇಟ್ ಪ್ರಾಡಕ್ಟ್
ಲಿಮಿಟೆಡ್ ಫ್ಯಾಕ್ಟರಿಯ ಹತ್ತಿರ ಎನ್.ಹೆಚ್-206 ರ ಬಿಹೆಚ್ ರಸ್ತೆ ದಾಟುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18 ಎಫ್-847 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ತನ್ನ
ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ
ಸಲ್ಮಾನ್ಪಾಷ ಬಿನ್ ಏಜಾಜ್ ಪಾಷ, 24 ವರ್ಷ,
8ನೇ ಕ್ರಾಸ್, ಅರಸೀಕೆರೆ ನಗರ, ರವರಿಗೆ ತೀವ್ರ ಸ್ವರೂಪದ
ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಏಜಾಜ್ ಪಾಷ್, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ: 26-12-2017 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಹೊಳೆನರಸೀಪುರ
ತಾಲ್ಲೂಕು, ಹಳೇಕೋಟೆ ಹೋಬಳಿ, ನ್ಯಾಮನಹಳ್ಳಿ ಗ್ರಾಮದ ವಾಸಿ ಲೇಟ್
ಆನಂದ, ರವರ ಮಗಳು ಕು|| ಕಾವ್ಯ, ಮನೆಯಿಂದ ಅಜ್ಜಿಯನ್ನು
ಮಾತನಾಡಿಸುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಕಾವ್ಯಳ ತಾಯಿ ಶ್ರೀಮತಿ ಮೀನಾಕ್ಷಿ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ,
ಕಾಣೆಯಾದ
ಹೆಂಗಸಿನ ಚಹರೆ: ಕು||
ಕಾವ್ಯ ಬಿನ್
ಲೇಟ್ ಆನಂದ,
19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು ಕನ್ನಡ ಭಾಷೆ
ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧಸಿರುತ್ತಾಳೆ. ಈ ಹುಡುಗಿ ಸುಳಿವು
ಸಿಕ್ಕಿಲ್ಲಿ 08175-273333 ಕ್ಕೆ ಸಂಪರ್ಕಿಸುವುದು.
No comments:
Post a Comment