* * * * * * HASSAN DISTRICT POLICE

Monday, December 4, 2017

PRESS NOTE : 02-012-2017

ಪತ್ರಿಕಾ ಪ್ರಕಟಣೆ               ದಿನಾಂಕ: 02-12-2017
ಅಪರಿಚಿತ ವಾಹನ ಡಿಕ್ಕಿ ಅಪರಿಚಿತ ವ್ಯಕ್ತಿ ಸಾವು
          ದಿನಾಂಕ: 01-12-2017 ರಂದು ರಾತ್ರಿ ಸುಮಾರು 02-30 ಗಂಟೆ ಸಮಯದಲ್ಲಿ  ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಮೇಟಿಮೆಲ್ಲಳ್ಳಿ ಗ್ರಾಮದ ಸೋಮಶೇಖರ್ ರವರು ಹಾಗೂ ಲಿಂಗರಾಜು ರವರು ಚನ್ನರಾಯಪಟ್ಟಣ ತಾಲ್ಲೂಕು, ಶೆಟ್ಟಿಹಳ್ಳಿ ಗ್ರಾಮದ ಬಳಿ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ರಾತ್ರಿ ಹೈವೆ ರೂಟ್ ಪೆಟ್ರೋಲ್ ವಾಹನದ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶೆಟ್ಟಿಹಳ್ಳಿ ಗ್ರಾಮದ ಶೆಟ್ಟಿಹಳ್ಳಿಯಮ್ಮ ದೇವಸ್ಥಾನದ ಎದುರು ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಯಾರೋ ಒಬ್ಬ ಅಪರಿಚಿತ ಗಂಡಸಿಗೆ ಬೆಂಗಳೂರು ಕಡೆಯಿಂದ ಬಂದ ಯಾವುದೋ ಒಂದು ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಅಪರಿಚಿತ ಗಂಡಸಿನ ತಲೆಗೆ ಮೈಕೈಗೆ ತೀವ್ರವಾಗಿ ಪೆಟ್ಟುಬಿದ್ದು, ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಪಘಾತ ಪಡಿಸಿದ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೋಗಿರುತ್ತಾನೆಂದು ಶ್ರೀ ಸೋಮಶೇಖರ ರವರು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಅಪರಿಚಿತ ವ್ಯಕ್ತಿಯ ಚಹರೆ:
1.            ಹೆಸರು                 : ಗೊತ್ತಿಲ್ಲ.
2.            ತಂದೆ/ಗಂಸನ ಹೆಸರು      : ಗೊತ್ತಿಲ್ಲ.
3.            ವಯಸ್ಸು                : 50-55 ವರ್ಷ
4.            ಎತ್ತರ                   : 5.4 ಅಡಿ ಎತ್ತರ
5.            ಚಹರೆ ಗುರುತು         : ಕೋಲು ಮುಖ, ಸಾಧಾರಣ ಶರೀರ, ಎಣ್ಣೆಗೆಂಪು ಮೈ ಬಣ್ಣ             
    6.  ಬಟ್ಟೆ                 : ನೀಲಿ ಬಣ್ಣದ ಜಕರ್ೀನ್, ಕೆಂಪು ಮತ್ತು ಕಪ್ಪುಗೀರುಳ್ಳ ತುಂಬು ತೋಳಿನ
                            ಶರ್ಟ್ , ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಬರ್ಮೋಡ  ಚಡ್ಡಿ ಧರಿಸಿರುತ್ತಾರೆ.
     7. ಕೂದಲು            :  ಕಪ್ಪು ಬಿಳಿ ತಲೆ ಕೂದಲು
ಗಂಡಸು ಕಾಣೆ
       ದಿನಾಂಕ: 20-11-2017 ರಂದು  ರಾತ್ರಿ 09-00 ಗಂಟೆ ಸಮಯದಲ್ಲಿ  ಅರಕಲಗೂಡು ಪಟ್ಟಣ ಕುರುಬರ ಬೀದಿ, ವಾರ್ಡ್ ನಂ.08 ರ ವಾಸಿ ರವಿಕುಮಾರ ರವರು ಮನೆಯಿಂದ ಆಸ್ಪತ್ರೆಯಲ್ಲಿ ಸಂಬಂಧಿಕರಿಗೆ ಊಟ ಕೊಡಲು ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರವಿಕುಮಾರ ರವರ ಪತ್ನಿ ಶ್ರೀಮತಿ ಇಂದ್ರ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ರವಿಕುಮಾರ @ ಕುಮಾರ, 38 ವರ್ಷ, 5'7'' ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಕಪ್ಪು ತಲೆ ಕೂದಲು, ಕಪ್ಪು & ಬಿಳಿ ಗಡ್ಡ ಬಿಟ್ಟಿರುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಮತ್ತು ಕಪ್ಪು ಬಣ್ಣದ ಚೆಕ್ಸ್ ಶಟರ್್, ನೀಲಿ ಬಣ್ಣದ ಲುಂಗಿ, ಹಸಿರು ಬಣ್ಣದ ಟವಲ್ ಹಾಕಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅರಕಲಗೂಡು ಠಾಣೆ ಫೋನ್ ನಂ. 08175-220249 ಕ್ಕೆ ಸಂಪರ್ಕಿಸುವುದು.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ, ಬಂಧಿತರಿಂದ 725/- ಬೆಲೆಯ ಮದ್ಯ ವಶ
       ದಿನಾಂಕ: 01-12-2017 ರಂದು ಸಂಜೆ 06-30 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ಡಿ.ಚಿಕ್ಕಗೊಂಡನಹಳ್ಳಿ ಗೇಟ್ ಹತ್ತಿರ ಬಿ.ಎಂ. ರಸ್ತೆಯಲ್ಲಿ ಪ್ರಭಾವತಿಯವರ ದಿವ್ಯ ಕಾಂಡಿಮೆಂಟ್ಸ್ ಅಂಗಡಿ ಮುಂಭಾಗ ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುತ್ತಿದ್ದಾರೆಂದು ಪಿಎಸ್ಐ ಶ್ರೀ ವಿನೋದ್ರಾಜ್, ಎಸ್.ಪಿ. ಚನ್ನರಾಯಪಟ್ಟಣ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಕುಡಿಯಲು  ಅನುವು ಮಾಡಿಕೊಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಪ್ರಭಾವತಿ ಕೊಂ ನಂಜೇಗೌಡ, 36 ವರ್ಷ, ಡಿ. ಚಿಕ್ಕಗೊಂಡನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಅವರ ವಶದಲ್ಲಿದ್ದ 725/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: