ಪತ್ರಿಕಾ ಪ್ರಕಟಣೆ ದಿನಾಂಕ: 12-01-2018
ಕಾರು ಬಸ್ ಹಿಂಭಾಗಕ್ಕೆ ಡಿಕ್ಕಿ, ಕಾರು ಚಾಲಕ ಸಾವು
ದಿನಾಂಕ: 12-01-2018 ರಂದು ರಾತ್ರಿ 2-45 ಗಂಟೆ ಸಮಯದಲ್ಲಿ ಹಾಸನದ ರಾಜಘಟ್ಟ
ವಾಸಿ ಶ್ರೀ ಸಚ್ಚಿನ್,
ರವರ ಬಾಬ್ತು
ಕೆಎ-51 ಡಿ-1898 ರ ಮಾರುತಿ ಸ್ವಿಫ್ಟ್
ಡಿಸೈರ್ ಕಾರಿನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಉದಯಪುರ ಗ್ರಾಮದ ಹತ್ತಿರ ನಿರ್ಲಕ್ಷ್ಯತೆಯಿಂದ
ಓಡಿಸಿಕೊಂಡು ಬಂದು ಮುಂದೆ ನಿಂತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಡಿಕ್ಕಿ ಮಾಡಿದ ಪರಿಣಾಮ, ಶ್ರೀ ಸಚ್ಚಿನ್ ಬಿನ್
ದ್ಯಾವೇಗೌಡ, 23 ವರ್ಷ, ರಾಜಘಟ್ಟ, ಹಾಸನ ಟೌನ್ ರವರಿಗೆ ತೀವ್ರ
ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಪ್ರಶಾಂತ್, ರವರು ಕೊಟ್ಟ ದೂರಿನ ಮೇರೆಗೆ
ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಇಬ್ಬರ ಬಂಧನ, ಮರಳು ಸಮೇತ ಟ್ರ್ಯಾಕ್ಟರ್
ವಶ:
ದಿನಾಂಕ: 11-101-2018 ರಂದು ಬೆಳಗಿನ ಜಾನ 2-00 ಗಂಟೆ ಸಮಯದಲ್ಲಿ
ಶ್ರೀಜಿ.ಸಿ. ರಮೇಶ್,
ಎಎಸ್ಐ, ಆಲೂರು ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ
ಆಲೂರು ತಾಲ್ಲೂಕು, ಆಲೂರು-ಮಗ್ಗೆ ರಸ್ತೆ, ಧರ್ಮಪುರಿ ಗ್ರಾಮದ ಹತ್ತಿರ
ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಗ್ಗೆ ಕಡೆಯಿಂದ ಆಲೂರು ಕಡೆಗೆ ಹೋಗುತ್ತಿದ್ದ
1) ಕೆಎ-46, ಟಿ-4339 ಮತ್ತು 2) ಕೆಎ-46, ಟಿ-4340 ರ 2 ಟ್ರ್ಯಾಕ್ಟರ್ಗಳನ್ನು
ತಡೆದು ತಪಾಸಣೆ ನಡೆಸಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರನ್ನು
ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶರತ್ ಬಿನ್ ರಮೇಶ್,
25 ವರ್ಷ, 2) ವಿಶ್ವಾಸ್ ಬಿನ್ ಶಿವಬಸಪ್ಪ, 19 ವರ್ಷ, ಕಿತ್ತನಗೆರೆ ಗ್ರಾಮ, ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು ಎಂದು
ತಿಳಿಸಿದ್ದವರನ್ನು ದಸ್ರಗಿರಿ ಮಾಡಿಕೊಂಡು ಮರಳು ಸಮೇತ 2 ಟ್ರ್ಯಾಕ್ಟರ್ನ್ನು ಅಮಾನತ್ತುಪಡಿಸಿಕೊಂಡು ಆಲೂರು
ಠಾಣೆಯಲ್ಲಿ ಪ್ರಕರಣ ದಾಖಸಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ:
09-01-2018 ರಂದು
ಬೆಳಿಗ್ಗೆ 9-00 ಗಂಟೆ
ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಹೊಸೂರು ಗ್ರಾಮದ ವಾಸಿ ಬೋರೇಗೌಡ ರವರ ಮಗಳು ಕು|| ಸೌಮ್ಯ, ರವರು ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ
ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸೌಮ್ಯಳ ತಂದೆ ಶ್ರೀ ಬೋರೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸೌಮ್ಯ
ಬಿನ್ ಬೋರೇಗೌಡ,
20 ವರ್ಷ, 5 ಅಡಿ
ಎತ್ತರ, ಎಣ್ಣೆಗೆಂಪು
ಬಣ್ಣ, ಸಾಧಾರಣಾ
ಮೈಕಟ್ಟು, ಮನೆಯಿಂದ
ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-258038 ಕ್ಕೆ
ಸಂಪರ್ಕಿಸುವುದು.
No comments:
Post a Comment