* * * * * * HASSAN DISTRICT POLICE

Monday, January 8, 2018

PRESS NOTE : 08-01-2018

ಪತ್ರಿಕಾ ಪ್ರಕಟಣೆ              ದಿನಾಂಕ: 08-01-2018

ಬೈಕ್ಗೆ ಕುರಿ ಅಡ್ಡ, ಒಬ್ಬನ ಸಾವು, ಇಬ್ಬರಿಗೆ ಗಾಯ:



ದಿನಾಂಕ: 07-01-2018 ರಂದು ಬೆಳಿಗ್ಗೆ 9-15 ಗಂಟೆ ಸಮಯದಲ್ಲಿ ಹಾಸನದ ಸಾಲಗಾಮೆ ರಸ್ತೆ, ಸರಸ್ವತಿಪುರಂ ವಾಸಿ ಶ್ರೀ ಪೀತಂರಾಜ್ ರವರ ಕೆಎ-13 ಇಸಿ-2610 ರ ಬೈಕ್ನಲ್ಲಿ ಸ್ನೇಹಿತರಾದ ಶ್ರೀ ವಿನಯ್ ಮತ್ತು ಶ್ರೀ ರವಿಶಂಕರ್ ರವರುಗಳೊಂದಿಗೆ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಗ್ಯಾರಹಳ್ಳಿ ಹತ್ತಿರ ಹಾಸನ-ಸಾಲಗಾಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಕುರಿ ಅಡ್ಡ ಬಂದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದಿದ್ದು ಶ್ರೀ ಪೀತಂರಾಜ್ ಬಿನ್ ರವಿಕಿರಣ್, 20 ವರ್ಷ, ಸರಸ್ವತಿಪುರಂ, ಸಾಲಗಾಮೆ ರಸ್ತೆ, ಹಾಸನ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಗಾಯಗೊಂಡ ಶ್ರೀ ವಿನಯ್, ಮತ್ತು ಶ್ರೀ ರವಿಶಂಕರ್, ರವರುಗಳು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ತಂದೆ ಶ್ರೀ ರವಿಕಿರಣ್ ರಾಜ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: